ಹುಡುಕಿ

ಪೋಪ್ ಲಿಯೋ XIV: ಪೋಪರ ಪ್ರತಿನಿಧಿಗಳು ಧರ್ಮಸಭೆಯ ಶಾಂತಿಯ ಸಾರ್ವತ್ರಿಕತೆಯ ಅಭಿಲಾಷೆಯನ್ನು ಪ್ರತಿನಿಧಿಸುತ್ತಾರೆ

ಪ್ರಪಂಚದಾದ್ಯಂತ ಇರುವ ತಮ್ಮ ಪ್ರತಿನಿಧಿಗಳನ್ನು ವಿಶ್ವಗುರು ಲಿಯೋ ಅವರು ಇಂದು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ ಧರ್ಮಸಭೆ ಹೇಗೆ ಈ ಜಗತ್ತನ್ನು ಪ್ರೀತಿಸುತ್ತದೆ ಎಂಬುದರ ಕುರಿತು ಸಾಕ್ಷಿಗಳಾಗಲು ಅವರಿಗೆ ಕರೆ ನೀಡಿದ್ದಾರೆ ಅವಶ್ಯಕತೆಯಲ್ಲಿರುವವರ ಜೊತೆಗೆ ಯಾವುದೇ ಸಂದರ್ಭದಲ್ಲಿ ಜೊತೆಯಾಗಲು ಧರ್ಮಸಭೆ ಹೇಗೆ ಅಪೇಕ್ಷಿಸುತ್ತದೆ ಎಂಬ ಕುರಿತು ಅವರಿಗೆ ತಿಳಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪ್ರಪಂಚದಾದ್ಯಂತ ಇರುವ ತಮ್ಮ ಪ್ರತಿನಿಧಿಗಳನ್ನು ವಿಶ್ವಗುರು ಲಿಯೋ ಅವರು ಇಂದು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ ಧರ್ಮಸಭೆ ಹೇಗೆ ಈ ಜಗತ್ತನ್ನು ಪ್ರೀತಿಸುತ್ತದೆ ಎಂಬುದರ ಕುರಿತು ಸಾಕ್ಷಿಗಳಾಗಲು ಅವರಿಗೆ ಕರೆ ನೀಡಿದ್ದಾರೆ ಅವಶ್ಯಕತೆಯಲ್ಲಿರುವವರ ಜೊತೆಗೆ ಯಾವುದೇ ಸಂದರ್ಭದಲ್ಲಿ ಜೊತೆಯಾಗಲು ಧರ್ಮಸಭೆ ಹೇಗೆ ಅಪೇಕ್ಷಿಸುತ್ತದೆ ಎಂಬ ಕುರಿತು ಅವರಿಗೆ ತಿಳಿಸಿದ್ದಾರೆ.

ವ್ಯಾಟಿಕನ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವಗುರು ಲಿಯೋ ಅವರು ಪ್ರಪಂಚದಾದ್ಯಂತ ಇರುವ ಪ್ರೇಷಿತ ರಾಯಭಾರಿಗಳು ಹಾಗೂ ಪೋಪರ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ. ರಾಜ ತಾಂತ್ರಿಕ ಪ್ರತಿನಿಧಿಗಳ ಜೊತೆಗೆ ವಿಶ್ವಗುರು ಆಗಿ ಆಯ್ಕೆಯಾದ ನಂತರ ಪ್ರಥಮ ಭೇಟಿಯನ್ನು ಹಮ್ಮಿಕೊಳ್ಳುವಂತೆ ವಿಶ್ವಗುರು ಲಿಯೋ ಸಹ ಈ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಂತ ಪೇತ್ರರ ಉತ್ತರಾಧಿಕಾರಿಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಹಾಗೂ "ಸುಬ್ ಉಮ್ಬ್ರ ಪೆತ್ರಿ" ಎಂಬ ಒಕ್ಕಣೆ ಇರುವ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅವರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಲಿಯೋ ಅವರು ಪೋಪರ ಪ್ರತಿನಿಧಿಗಳು ಅಖಿಲ ಧರ್ಮಸಭೆಯ ಮುಖಪುಟವಾಗಿದ್ದು, ಅವರು ವಿವಿಧ ದೇಶಗಳಿಂದ ಆಯ್ಕೆಯಾಗಿರುವ ಕಾರಣ ಧರ್ಮಸಭೆಯ ಸಾರ್ವತ್ರಿಕತೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಪವಿತ್ರ ಪೀಠಕ್ಕಿಂತ ಹೆಚ್ಚು ಸಹಭಾಗಿತ್ವದಲ್ಲಿ ಹಾಗೂ ಅನ್ಯೋನ್ಯತೆಯಲ್ಲಿ ಇರುವ ರಾಜತಾಂತ್ರಿಕ ಮಂಡಳಿಯು ಬೇರೆ ಯಾವ ದೇಶದಲ್ಲೂ ಇಲ್ಲ ಎಂದು ಹೇಳಿದ್ದಾರೆ. ಪವಿತ್ರ ಪೀಠದ ರಾಜತಾಂತ್ರಿಕ ಮಂಡಳಿಯು ಬಹು ಮುಖ್ಯವಾಗಿದ್ದು ಮಾನವ ಸಹೋದರತೆ ಶಾಂತಿ ಹಾಗೂ ಸಾಮರಸ್ಯದ ಕುರಿತು ಸಂದೇಶವನ್ನು ಜಗತ್ತಿನಾದ್ಯಂತ ಹರಡುತ್ತದೆ ಎಂದು ಹೇಳಿದ್ದಾರೆ. 

ಪವಿತ್ರ ಪೀಠದ ರಾಜ ತಾಂತ್ರಿಕ ಮಂಡಳಿಯು ಸೇವೆಯನ್ನು ಮಾಡುತ್ತಿದ್ದು ಅದರ ಪ್ರತಿನಿಧಿಗಳು ಈ ಜಗತ್ತಿಗೆ ಹಾಗೂ ಧರ್ಮ ಸಭೆಗೆ ಸೇವಾ ಕಾರ್ಯವನ್ನು ಹೊಂದಿದ್ದಾರೆ ಎಂದು ವಿಶ್ವಗುರು ಲಿಯೋ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಶುಭ ಸಂದೇಶದ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಸದಾ ಪೇತ್ರರ ದೃಷ್ಟಿಯಲ್ಲಿರಿ. ಸಾಧ್ಯವಾಗದ ಸ್ಥಳಗಳಲ್ಲಿ ಸಂಬಂಧಗಳನ್ನು ಬೆಸೆಯಲು ಹಾಗೂ ನಿರ್ಮಿಸಲು ಸಾಮರ್ಥ್ಯವಿರುವ ವ್ಯಕ್ತಿಗಳಾಗಿರಿ ಎಂದು ಹೇಳಿದರು. ಕೊನೆಯದಾಗಿ ಅವರು ಪವಿತ್ರ ಪೀಠಕ್ಕೆ ಹಾಗೂ ಅಖಿಲ ಧರ್ಮ ಸಭೆಗೆ ನೀಡುತ್ತಿರುವ ಎಲ್ಲಾ ರೀತಿಯ ಸೇವೆಗಾಗಿ ಧನ್ಯವಾದಗಳನ್ನು ತಿಳಿಸಿದರು.

10 ಜೂನ್ 2025, 17:26